Shri Siddharoodha Swamiji Math Trust Committee

Hubballi

www.srisiddharoodhaswamiji.in

ವಿಜೃಂಭಣೆಯಿಂದ ಜರುಗಿದ ಸದ್ಗುರು ಶ್ರೀಸಿದ್ಧಾರೂಢ ಸ್ವಾಮಿಗಳವರ 188 ನೇ ಜನ್ಮೋತ್ಸವ
Date : 17-04-2024
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ 188 ನೇ ಜನ್ಮೋತ್ಸವವನ್ನು ದಿನಾಂಕ: 17.04.2024 ರಂದು ಅತೀ ವಿಜೃಂಭಣೆಯಿಂದ ನೆರವೇರಿಸಲಾಯಿತು. ಜನ್ಮೋತ್ಸವದ ಅಂಗವಾಗಿ ಪ್ರಾತ:ಕಾಲ 5:30 ಘಂಟೆಗೆ ಉಭಯಶ್ರೀಗಳವರ ಗದ್ದುಗೆಗಳಿಗೆ ಅಭೀಷೇಕ, ಅಪರಾಹ್ನ:12-00 ಘಂಟೆಗೆ ಸುಮಂಗಲೆಯರಿಗೆ ಉಡಿತುಂಬುವುದು, 12-30 ಘಂಟೆಗೆ ಶ್ರೀಗಳವರ ಉತ್ಸವ ಮೂರ್ತಿಯ ಪಾಲಕಿಯು ವಾದ್ಯಮೇಳಗಳೊಂದಿಗೆ ಹೊರಟು ನಗರದಲ್ಲಿ ಸಂಚರಿಸಿ ಬಂದ ನಂತರ ಸಾಯಂಕಾಲ:5-30 ಘಂಟೆಗೆ ಕುಂಭಹೊತ್ತ ಮಹಿಳೆಯರು ಶ್ರೀಮಠಕ್ಕೆ ಬರಮಾಡಿಕೊಂಡರು. 5:45 ಘಂಟೆಗೆ ಶ್ರೀಮಠದ ಕೈಲಾಸಮಂಟಪದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ ಇವರು ಚಾಲನೆಯನ್ನು ನೀಡಿ, ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಟ್ರಸ್ಟ್ ಕಮೀಟಿ ವತಿಯಿಂದ ನಿರ್ಮಿಸಿದ ಜಗದ್ಗುರು ಶ್ರೀ ಸಿದ್ಧಾರೂಢರ ಅತಿಥಿಗೃಹ, ಉಭಯ ಶ್ರೀಗಳವರ ಮಂದಿರಗಳ ಮುಂದಿರುವ ಆವರಣದ ನೆಲಕ್ಕೆ ಗ್ರಾನೈಟ್ ಕಲ್ಲುಗಳ ಜೋಡಣೆ ಕೆಲಸ ಮತ್ತು ಯಾತ್ರಿ ನಿವಾಸ ಕೊಠಡಿಗಳ ನವೀಕರಣದ ಉದ್ಘಾಟನೆಯನ್ನು ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ ಇವರು ವಹಿಸಿದ್ದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಟ್ರಸ್ಟ್ ಕಮೀಟಿಯ ವೈಸ್ ಚೇರ್‌ಮನ್ನರಾದ ಶ್ರೀ ಉದಯಕುಮಾರ ಡಿ. ನಾಯ್ಕ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಡಾ||ಗೋವಿಂದ ಗು. ಮಣ್ಣೂರ, ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ, ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸದರ ಕಾರ್ಯಕ್ರಮದ ಪ್ರಯೋಜನವನ್ನು ಕರ್ನಾಟಕ, ಮಹಾರಾಷ್ಟ, ಗೋವಾ ಹಾಗೂ ಇನ್ನೂ ಅನೇಕ ಊರುಗಳಿಂದ ಬಂದ ಸಾವಿರಾರು ಜನ ಭಕ್ತ ಸಮೂಹ ಪಡೆದುಕೊಂಡರು.